ಸ್ವಾರ್ಥ ಸುಖದ ಬೆನ್ನೇರಿ ,ದುರಾಸೆಯ
ಗುಲಾಮರಾಗಿ ತಮ್ಮ ತೃಪ್ತಿಗೆ ಪರರ
ಜೇಬಿಗೆ ಅಧಿಕಾರಡಿ ಕೈ ಹಾಕಿ
ಹಣ ಕಸಿದು ,ನಿಷ್ಪಾಪಿಗಳ ಹಿಂದಿ
ಹಿಪ್ಪೆಯ ಮಾಡುವ ಭ್ರಷ್ಟರಣ್ಣ ಇವರು ಭ್ರಷ್ಟರು .
ಶವ ಪೆಟ್ಟಿಗೆಯಲಿ ಮಲಗಿ ,ದನದ ಮೇವ ಮೇಯ್ದು ,
ಭೂ ಕಬಳಿಕೆಯ ಮಾಡಿ ,ಬಂದೂಕು ಶಸ್ತ್ರಾಸ್ತ್ರಗಳ
ಹಪ್ಪಳ ಚಕ್ಕುಲಿಗಳಂತೆ ಕಟಕಟನೆ ಕಡಿದು ಬಡ
ಜನರ ಕಣ್ಣೀರಿನಲಿ ಕೈ ತೊಳೆಯುವ
ಹಗರಣಗಳ ಪ್ರಚಂಡ ಭ್ರಷ್ಟರಣ್ಣ ಇವರು .
ಮೆಜಿನಡಿಯಲಿ ಕಳ್ಳತನದಿ ಪಡೆದ ಕಪ್ಪು ಹಣ ,
ಚಿನ್ನ ವಜ್ರಗಳಲಿ ದೇವರಿಗೂ ಪಾಲು ನೀಡಿ ,
ಪಾಪದಿಂದ ದೂರಾದೆವೆಂದು ನಿಟ್ಟುಸಿರು ಬಿಡುತಲಿ ,
ಸಡಗರಿಸುತಲಿ ಪೊಳ್ಳು ಭ್ರಮೆ
ಹಿಂದೆ ಓಡುವ ಭ್ರಷ್ಟರಣ್ಣ ಇವರು ಭ್ರಷ್ಟರು .
ಹಸಿದ ಜೀವಗಳ ಯಾತನೆಯ ಅರಿಯದೆ
ಮುಗ್ದ ರೈತ ,ಕಾರ್ಮಿಕರ ರಕ್ತವ ಸೊಳ್ಳೆ ,
ತಿಗಣೆ ಗಳಿಗಿಂತಲೂ ಒಂದು ಕೈ ಮೇಲೆಂಬಂತೆ
ಹೀರಿ ನಲಿಯುವ ನಿಷ್ಕರುಣಿ ಭ್ರಷ್ಟರಣ್ಣ ಇವರು ಭ್ರಷ್ಟರು .
Saturday, March 7, 2009
Subscribe to:
Post Comments (Atom)
No comments:
Post a Comment