Saturday, March 7, 2009

ತಾಯೆ ನಿನ್ನ ಬಿಡೆವು !


ಕನ್ನಡಿಗರ ಜೀವದಾಯಿನಿ, ಸರ್ವಜನ ಪೋಷಿಣಿ ,
ಅಮೃತ ವಾಹಿನಿ ,ಕಾವೇರಿ ಮಾತೆ ನೀ
ಹರಿವ ನೆಲ ಹಸಿರು ಆದರಿಂದು ನಿನ್ನ
ಮಕ್ಕಳೇ ನಿನಗಾಗಿ ಸುರಿಸುತಿಹರು ನೆತ್ತರು .

ನಾವು ನಿನ್ನ ಕುಡಿಗಳು,ನಿನ್ನಂತೆ ಉದಾರಿಗಳು ದಿಟ ,
ಆದರೆಂದೂ ಸಹಿಸೆವು ನೆರೆಯವರ ಮೋಸದಾಟ ,
ನಮ್ಮಲ್ಲೇ ಖಾಲಿ ಕೊಡಗಳ ಸಾಲು ,
ಪರರಿಗೆಂತು ಕೊಡುವುದು ಹೆಚ್ಚು ಪಾಲು .

ಕರುನಾಡ ನೆಲದಲ್ಲಿ ಜನಿಸಿ ತುಳುಕಿ ,ಬಳುಕಿ ,
ನೆರೆ ರಾಜ್ಯದಲ್ಲಿ ಸಂಚರಿಸಿ ಅಂತ್ಯದಿ ಸಾಗರನ ಅಪ್ಪಿ ,
ನಲಿವ ಕಾವೇರಿ ತಾಯೇ ಒಮ್ಮೆ ನೋಡು ನಿನ್ನ ತವರಿನ ಮಕ್ಕಳ
ದಣಿದ ಬಾಯ್ಗಳ,ರೈತನ ರಕ್ತ ಕಣ್ಣೀರ .

ಅನೈಕ್ಯ ಮತವ ತುಳಿದು ನಿಂತಿಹೆವು ,
ಈ ನಮ್ಮ ಹೋರಾಟ ಅಮರವು ,
ಭೇದ ಭಾವಗಳ ಗಾಳಿಗೆ ತೂರಿ ಮುನ್ನುಗ್ಗುತಿಹೆವು
ನಿನ್ನ ಬಿಡೆವು ತಾಯೇ ಎಂದೆಂದೂ ನಿನ್ನ ಬಿಡೆವು !!!

No comments:

Post a Comment