Saturday, March 7, 2009

ಎಚ್ಚರ ! ಕಡೆಗಣಿಸಿರಿ ಎನ್ನ .


ನಿಮ್ಮ ಹೊಟ್ಟೆ ತಣಿಸುವ ಕೆಚ್ಚಳನ್ನೇ ಕತ್ತರಿಸ ಬೇಡಿರಣ್ಣ!
ಮಾಂಸದಾಸೆಗೆ ನಾ ಹೆತ್ತ ಎಳೆ ಕಂದನ ನಿರ್ದಯದಿ
ವಧಾ ಸ್ಥಾನಕ್ಕೆ ಎಳೆದೊಯ್ಯದಿರಿಯಣ್ಣ .ಪರದೇಶಿ ಹಸು ,
ಎತ್ತುಗಳ ಈ ನೆಲದಲ್ಲಿ ಪೋಷಿಸಿ ,ಹಾರ್ಮೋನು ಔಷಧಿಗಳ
ಚುಚ್ಚಿ ಎನ್ನ ಹಿಂಸಿಸಬೇಡಿರಣ್ಣ .

ನಾ ನೀಡುವ ಗಂಜಲ ಅಮೃತ ಜಲ ,ಸಗಣಿ
ನಿಮ್ಮ ಪಾಲಿನ ಸಂಜೀವಿನಿ ,ನನ್ನಲ್ಲಿ ಸೂರ್ಯನಾಡಿಯುಂಟು
ಆ ಕಾರಣ ನಾ ಕೊಡುವ ಹಾಲು ಶುಧ್ಧ ಹಳದಿ ,ಎನ್ನ ಉಸಿರ
ಸೌರಭದ ಆಘ್ರಾಣದಿ ನಿಮ್ಮ ಜೀವನವಾಗುವುದು ಹಸಿರು .

ಅಮೃತ ಮಹಲ್ ,ಮಲೆನಾಡು ಗಿಡ್ಡ ,ಹಳ್ಳಿಕಾರ್ ,ದೆವಣಿ,
ಗಿರ ,ಮಾಳವ ,ನಗೊರಿ,ನಿಮಾರಿ ,ಸಹಿವಾಲ್ ಇವರೆಲ್ಲರೂ
ಈ ನೆಲದವರು .ಉತ್ತು,ಬಿತ್ತು,ದಣಿದು ಸುರಿವ ಅನ್ನದಾತನ ಬೆವರು
ಹನಿಗಳಲಿ ನಮ್ಮ ಪಾಲೂ ಉಂಟು .ರೋಗನಿರೋಧಕ ಶಕ್ತಿಯಿಂದ
ಬದುಕುವ ನಮಗೆ ಪರದೇಶಿ ಹಸುಗಳು ಸಮಾನವೇ ?

ಗೋವೆ ವಿಶ್ವದ ತಾಯಿ ಎಂದ ನೆಲದಲ್ಲಿ ಎನ್ನ ಕೊಲ್ಲದಿರಿ !ಎನ್ನ
ತಿರಸ್ಕರಿಸದಿರು ಮನುಜ ,ಎನಗಾಗಿ ಕೌಶಿಕನು ಗರ್ವಡಿ ಹೋರಾಡಿ
ಸೋತು ಶರಣಾದ,ದಿಲೀಪ ಎನ್ನ ಅವಮಾನಿಸಿ ಶಾಪದಿ ಪುತ್ರ
ಸಂತಾನವಿಲ್ಲದೆ ವಿಲಪಿಸಿದ ಎನ್ನ ಕಡೆಗಣಿಸಿ ನೀ
ಭಾರಿ ಬೆಲೆಯ ತೆತ್ತಬೇಕಾದೀತು ಎಚ್ಚರ !

No comments:

Post a Comment