Tuesday, March 24, 2009

ನನ್ನ ಶಂಕರ


ಆ ಶೈಲಾ ದುದಯಾ ತ್ತಥಾಸ್ತಗಿರಿತೋ
ಭಸ್ವದ್ಯಶೊರಶ್ಮಿಭಹವ್ಯಾಪ್ತಂ ವಿಶ್ವಮನಂಧಕಾರಮಭಾವದ್ಯಸ್ಯ ಸ್ಮಶಿಶ್ಯೇರಿದಂ
ಆರಾದ್ ಜ್ಞಾನದಭಿಸ್ತಿಭಿಹಿ ಪ್ರತಿಹತಶ್ಚನ್ದ್ರಾಯುತೆ ಭಾಸ್ಕರಹ
ತಸ್ಮೈ ಶಂಕರ ಭಾನವೇ ತನುಮನೋ ವಾಭಿರ್ನಮಸ್ಕುರ್ಮಹೆ

ಉದಯಗಿರಿಯಿಂದ ಅಸ್ತಗಿರಿಯವರೆಗೂ ಹರಡಿದ ಯಾರ ಶಿಷ್ಯರ ಉಜ್ವಲ ಕೀರ್ತಿಯ ಕಿರಣ ಗಳ ಹಬ್ಬುವಿಕೆಯಿಂದ ವಿಶ್ವದ ತಮಸ್ಸು ದೂರವಾಗಿದೆಯೋ ,ಯಾರ ಜ್ಞಾನದ ಕಿರಣಗಳಿಂದ ಹೊಡೆಯಲ್ಪತ್ತು ಸೂರ್ಯನೂ ಚಂದ್ರನಂತೆ ಕಾನುವನೋ ಆ ಶಂಕರ ಭಾನುವಿಗೆ ತನು.ಮನ,ವಾಕ್ಕುಗಳಿಂದ ನಮಸ್ಕರಿಸುತ್ತೇವೆ.

ಸನಾತನ ಧರ್ಮ ಅವಸಾನದ ಹಾದಿಯನ್ನು ಹಿಡಿದಿತ್ತು ,ಸತ್ಯ ಮರೆಯಾಗಿ ,ಜನ ಕಣ್ಣಿದ್ದೂ ಕುರುಡಾಗಿದ್ದರು ,ವಾಮಾಚಾರ ,ನರಬಲಿ ,ಚಾರ್ವಾಕರ ನಾಸ್ತಿಕವಾದ ಎಲ್ಲೆಯಿಲ್ಲದೆ ಬೆಳೆಯ ತೊಡಗಿತ್ತು .ವೈದಿಕ ತತ್ವ ,ಸಿಧಾನ್ತಗಳು ಪಂಡಿತ ಮಹಾಶಯರ ಕಪಿ ಮುಷ್ಟಿಯಲ್ಲಿ ಸಿಲುಕಿ ಸಾಮಾನ್ಯರ ಪಾಲಿಗೆ ಮರೀಚಿಕೆ ಯಾಗಿದ್ದವು .ಶಾಸ್ತ್ರಗಳ ಅಂತಃಸತ್ವ ಮರೆಯಾಗಿದ್ದವು ನನ್ನ ದೇವರು ಶ್ರೇಷ್ಠ ನಿನ್ನ ದೇವರು ಕನಿಷ್ಠ ಎಂಬ ವಾಗ್ಯುದ್ಧ ಮುಗಿಲು ಮುತ್ತಿಟ್ಟು.antahಅ ಸಂಧಿಗ್ನ ಪರಿಸ್ಥಿತಿಯಲ್ಲಿ ಶಂಕರ ಜನನ ವಾಯಿತು .

ಶಂಕರರು ಇತಿಹಾಸದ ಅಮರ ಪುಟಗಳಲ್ಲಿ ಅಮೊಘಸ್ಥಾನ ಪಡೆದು ಜಗದ್ಗುರುವಾಗಿ ಅವರು ಅಖಂಡ ಪರಿಶ್ರಮ ಮತ್ತು ಅನುಪಮ ಪಾಂಡಿತ್ಯದಿಂದ ನೀಡಿದ ಒಂದೊಂದು ವಿಚಾರವೂ ಅಣಿ ಮುತ್ತುಗಳೇ .ಜಗದ್ಗುರುಗಳು ದೇಹ ದಾನ ಮಾಡಿ ಸುಮಾರು ಸಾವಿರದ ಮುನ್ನೂರು ವರ್ಷಗಳಾಗಿದ್ದರೂ ಇಂದಿಗೂ ಅವರ ಹೆಸರು ,ತತ್ವಗಳು ವಿಶ್ವಾದ್ಯಂತ ಚಿರಸ್ಥಾಯಿ .

ಶಂಕರರೇ ಹೇಳಿದಂತೆ ಬ್ರಹ್ಮ ಸತ್ಯಮ್ ಜಗನ್ಮಿತ್ಯಂ ಜೀವೋ ಬ್ರಹ್ಮ ಇವ ನಪರ; ಅರ್ಥಾತ್ ಬ್ರಹ್ಮ್ಹವೊಂದೆ ಸತ್ಯ ,ಅದು ಎರಡಿಲ್ಲ ಸತ್ ,ಚಿತ್ ,ಆನಂದವೇ ಅದರ ಸ್ವರೂಪ .ಅದು ಇಂದ್ರಿಯಾತೀತವಾದುದ್ದು ,ಅಭೆದ್ಯವಾದುದ್ದು ,ಸಕಲ ಚರಾಚರ ಸೃಷ್ಟಿಯ ಆಧಾರವೂ ,ಸರ್ವಾನ್ತರ್ಯಾಮಿಯು ,ಚೆನಗಳ ಚೈತನ್ಯವೂ ,ಅನಿತ್ಯಗಳಲ್ಲಿ ನಿತ್ಯವೂ ,ಅಣುವಲಲದ್ದುaವ್ಯಯವೂ ಆಗಿದೆ ಆದರೆ ಚಿತ್ತ ಶುದ್ಧಿ ಇಲ್ಲ ದ ನಾವು ಮಾಯೆಯ ವಶದಿಂದ ಅನಂತನೂ ,ಶುದ್ಧನೂ ,ನಿರಾಕಾರ,ನಿರ್ಗುಣ ನಿರಂಜನ ,ಸ್ವಪ್ರಾಕಷಕ ಬ್ರಹ್ಮನನ್ನು ಕಾಣಲಾಗದೆ ತೊಲಲಾದುತ್ತೇವೆನಾವು ಬ್ರಹ್ಮನನ್ನು ಕಾನುತ್ತೆವೆಯೋ ಅಂದು ಭಯವಿಲ್ಲ ,ಯಾರಲ್ಲಿಯೂ ದ್ವೇಷವಿಲ್ಲ ,ಕದನವಿಲ್ಲ.ಏಕೆಂದರೆ ಆತ್ಮದಲ್ಲಿ ಬ್ರಹ್ಮನನ್ನು ಕಾನುವವನಿಗೆ ಲಿಂಗ ,ಜಾತಿ,ಧರ್ಮ,ಭಾಷೆ ,ರೂಪ ಸೌಂದರ್ಯಗಳ ಮೋಹಪಾಶ ಎಂದೂ ಬಂಧಿಸಲು ಸಾಧ್ಯವಿಲ್ಲ .ಆತ ಸ್ವಾತ್ಮರಾಮನಾಗಿ ,ಚಿದಾನಂದ ರೂಪಿಯಾಗಿ ಸಮನ್ವಯತೆ ,ಪ್ರೀತಿ ,ವಿಶ್ವಾಸಗಳಲ್ಲಿ ನಂಬಿಕೆಯಿತ್ತು ಇಡೀ ವಿಶ್ವವನ್ನೇ ಒಂದಾಗಿ ನೋಡುವ ಶಕ್ತಿ ಮೂಡಿ ಬರುತ್ತದೆ ಆ ಕ್ಷಣ ವಿಶ್ವ ಆತನ ಅಂಗೈ ಯಲ್ಲಿನ ನಲ್ಲಿಕಾಯಿಯಂತೆ ಕಾಣುತ್ತದೆ .
ಶಂಕರರು ಉಚ್ಚರಿಸಿದ ಅಹಂ ಬ್ರಹ್ಮಾಸ್ಮಿ ಹಾಗು ತತ್ವಮಸಿ ಅಂದರೆ ನೀನು ಬ್ರಹ್ಮ ನಾನು ಬ್ರಹ್ಮ ಎಂಬ ಉಕ್ತಿಯನ್ನು ನಾವು ಪಾಲಿಸಿದ್ದೆ ಆದರೆ ಕ್ರಮೇಣ ವಿಶ್ವಮಾನವತೆಯ ಪವಿತ್ರಗಂಗೆ ಹೃದಯದಿಂದ ಹೃದಯಕ್ಕೆ ಅಮ್ರುತವಾಹಿನಿಯಾಗಿ ಹರಿಯುತ್ತದೆ ,ವಿಶ್ವ ಚೈತನ್ಯದ ಸುಗಂಧ ಪಸರಿಸುತ್ತದೆ .

ಅಸಮಾನತೆ ಇದಕ್ಕೆ ನೂರೆಂಟು ಮುಖಗಳು ,ಆರ್ಥಿಕ ಅಸಮಾನತೆ ,ಧಾರ್ಮಿಕ ಅಸಮಾನತೆ ,ವರ್ಣ ಅಸಮಾನತೆ ,ಲಿಂಗ ಅಸಮಾನತೆ ಇವು ತಮ್ಮ ಕ್ರೂರ ಮೊಗಗಳನ್ನು ತೋರಿದೆಡೆಯಲ್ಲ ನೋವಿನ ಚೀತ್ಕಾರ ,ರಕ್ತದ ಓಕುಳಿ ,ಕಣ್ಣೀರು ,ಸಂಕಟಗಳ ಕಾರುಬಾರು ,ಜಾತಿ ಧರ್ಮ ಭಾಷೆಗಳೆಂಬ ಸಂಪ್ರದಾಯಗಳ ಪರಿಧಿಯೊಳಗೆ ಇದು ನನ್ನ ಭೂಮಿ ಇವರು ತನ್ನವರು ಅವರು ಪರರು ಎಂಬಂತೆ ಬದುಕುವುದೇ ಅಭ್ಯಾಸವಾಗಿಹೋಗಿದೆ .ಎಲ್ಲರ ಹೃದಯಗಳಲ್ಲೂ ಪುಟ್ಟ ಪುಟ್ಟ ಹಿಟ್ಲರ್ ಗಳು ಜೀವ ಪಡೆಯುತ್ತಿದ್ದಾರೆ .ಧರ್ಮ ,ಮತ ,ಹಣ ಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ನಿರ್ಜೀವಿಗಲಾಗುತಿದ್ದೇವೆ ,ಕೀಳರಿಮೆ ,ಮೇಲರಿಮೆ ಗಳ ಪೊಳ್ಳು ಭ್ರಮೆಗಳ ಮಧ್ಯೆ ಹೃದಯಗಳು ತೊಲ್ಲಗುತ್ತಿವೆ ಅಸಮಾನತೆಯ ನೂರಾರು ನೇಣು ಕುಣಿಕೆಗಳು ಮುಗ್ಧರ ,ಬಡವರ ಕೊರಳುಗಳನ್ನು ಆವರಿಸುತ್ತಿವೆ .ಒಮ್ಮೆ ಶಂಕರರ "ಸರ್ವಸ್ಮಿನ್ನಪಿ ಪಶ್ಯಾತ್ಮಾನಂ ಸರ್ವೋತ್ಸೃಜ ಭೇದ ಜ್ಞಾನಂ "ಅರ್ಥಾತ್ ಎಲ್ಲರಲ್ಲಿಯಿ ನಿನ್ನನ್ನೇ ಕಾಣು ಎಲಾದರಲ್ಲಿಯು ಭೇದ ವೆನಿಸದಿರು ಎಂಬುದನ್ನೂ ಮನನ ಮಾಡಿಕೊಂಡರೆ ಈ ನೇಣು ಕುಣಿಕೆಗಳು ಮರೆಯಾಗುತ್ತವೆ,ಕೊರಳುಗಳು ವಿಮುಕ್ತವಾಗುತ್ತವೆ ,ಜಗದ ಕಲ್ಯಾಣದಲ್ಲಿ ಆತ್ಮ ಕಲ್ಯಾಣ ಕಂಡು ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಇದೊಂದು ರೀತಿಯ ಮುಕ್ತ ಸ್ಥಿತಿ .
ಆ ಸಮಯದಲ್ಲಿ ಮಾನವನ ಕೆಟ್ಟ ಹಸಿವು ,ದಾಹಗಳಿಗೆ ಕಡಿವಾಣ ಹಾಕಿ,ವಿಶ್ವಾತ್ಮದಲ್ಲಿ ಶರಣಾಗಿ ,ಎಲ್ಲ ಎಲ್ಲೆಗಳನ್ನು ಮೀರಿ ನಿಲ್ಲುತ್ತದೆ ತಾನೂ ಬದುಕಿ ಇತರರ ಬದುಕಿಗೆ ಅರ್ಥ ತರುತ್ತೇವೆ .ಆ ಕ್ಷಣ ಮಾನವತೆ ಮೆರೆಯುತ್ತದೆ .

No comments:

Post a Comment