Friday, March 27, 2009

ಎಚ್ಚರ ಬತ್ತುತಲಿದೆ ಭೂತಾಯಿಯ ಒಡಲು!

ಒಂದೆಡೆ ವಾರಕ್ಕೊಮ್ಮೆ ಕೊಳಾಯಿಗಳಿಂದ ತೊಟ್ಟಿಕ್ಕುವ ಕುಡಿಯುವ ನೀರು ,ಮತ್ತೊಂದೆಡೆ ,ಹನಿ ಹನಿ ನೀರಿಗೂ ಪರದಾಡುತ್ತಾ,ಹಪಹಪಿಸುತ್ತಾ,ಖಾಲಿಕೊದಗಳ ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡುವ ಹೆಣ್ಮಕ್ಕಳು ,ತಾನು ಹಾಕಿದ ಬೀಜ ಮೊಳೆಯದೆ,ಭೂ ತಾಯಿಯ ಬಾಯಿ ಒಣಗಿ ಬಿರುಕು ಬಿಟ್ಟ ನೆಲವನ್ನು ನೋಡುತ್ತಾ ಚಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತ ತಲೆಯ ಮೇಲೆ ಕೈ ಹೊತ್ತು ಕುಳಿತ ನೇಗಿಲಯೋಗಿ ,ಬರ ರಾಕ್ಷಸನ ಕೆಟ್ಟ ಹಸಿವಿಗೆ ಬರಿದಾಗಿರುವ ಊರ ಕೆರೆ,ತೊರೆ ,ಬಾವಿಗಳು . ಇಂತಹ ಹೃದಯ ವಿದ್ರಾವಕ ದೃಶ್ಯಗಳು ಬೇಡವೆಂದರೂ ಆಗಾಗ್ಗೆ ನಮ್ಮ ಕಣ್ಣ ಮುಂದೆ ಬಂದು ಆಗಾಗ ಸುಳಿದು ಹೋಗುತ್ತವೆ .ಇವು ಜಲಕ್ಷಾಮದ ಕೆಲವು ಮಾದರಿಗಳಷ್ಟೇ . ರೀತಿ ನೀರಿಗಾಗಿ ಎದ್ದಿರುವ ಆಕ್ರಂದನ ಮುಗಿಲು ಮುಟ್ಟಿದೆ .ನೀರಿಲ್ಲದ ಜಗತ್ತನ್ನು ನಾವು ಕನಸಿನಲ್ಲಿ ಊಹಿಸಿಕೊಳ್ಳುವುದೂ ಅಸಾಧ್ಯದ ಮಾತು .ಏಕೆಂದರೆ ,ನೀರು ಜೀವ ಸಂಕುಲದ ಮೂಲಾಧಾರ .ಆದರೆ ದುರಾಸೆ ಮನುಕುಲ ನಿಸರ್ಗ ಮಾತೆಯ ಮೇಲೆ ಮಾಡುತ್ತಿರುವ ವಿವೇಚನಾರಹಿತ ದುರಾಕ್ರಮನದ ಪ್ರತಿಫಲವೇ ಜಲಕ್ಷಾಮ.ಇದು ಕೇವಲ ಯಾವುದೋ ಒಂದು ರಾಷ್ಟ್ರದ ಕಥೆ -ವ್ಯಥೆಯಲ್ಲ ಇಡೀ ಪ್ರಪಂಚವೇ ಇದು ನೀರಿಗಾಗಿ ಪರಿತಪಿಸುತ್ತಿದೆ .ರಾಜ್ಯ,ರಾಷ್ಜ್ತ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ .ಭಾರತದಲ್ಲೇ ೧೯೪೭ ರಲ್ಲಿ ೬೦೦೮ ಕ್ಯುಬಿಕ್ ಮೀಟರ್ ನಷ್ತಿದ್ದ ನೀರಿನ ಪ್ರಮಾಣ ಈಗ ೨೨೬೬ ಕ್ಯುಬಿಕ್ ಮೀಟರ್ ಮಟ್ಟಕ್ಕೆ ಕುಸಿದಿದೆ .ಇದು ೧೦೦೦ ಮಟ್ಟಕ್ಕೆ ಇಳಿದಿದ್ದೆ ಆದರೆ ದೇಶದ ಅರ್ಥವ್ಯವಸ್ಥೆಯೇ ಕುಸಿದು ಬೀಳುತ್ತದೆ ಎಂದು ಟಾಟ ಎನರ್ಜಿ ಇನ್ಸ್ಟಿಟ್ಯೂಟ್ ಭವಿಷ್ಯ ನುಡಿದಿದೆ .




ಇನ್ನಾದರು ನಾವು ಎಚ್ಚೆತ್ತು ಕೊಲ್ಲದಿದ್ದರೆ ಭವಿಷ್ಯದ ಜನಾಂಗ ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ .ಮಳೆಯ ಒಂದು ಹನಿಯು ಸಾಗರ ಗರ್ಭವನ್ನು ಸೇರದಂತೆ ಎಚ್ಚರ ವಹಿಸಿ ನೀರನ್ನು ಅಭಿವೃದ್ಧಿ ಕಾರ್ಯಗಳಿಗೆ ಹೊತ್ತು ಭಗೀರಥರು ನಾವಾಗಬೇಕಿದೆ .






ನೀರಿನ ಸಂರಕ್ಷಣೆ ಹೇಗೆ ?




ನೀರು ಎಂಬ ಸಂಪತ್ತು ಮಿತವಾಗಿದೆ .ಆದರೆ ಅದು ಬಹು ಕಾರ್ಯಗಲಿ ಉಪಯೋಗಿಸಲ್ಪಡುತ್ತಿದೆ .ಇಂತಹ ಕೊರತೆಯ ಸಂಪನ್ಮೂಲವನ್ನು ಹೆಚ್ಚಿನ ಜಾಗರೂಕತೆಯಿಂದ ಅಗತ್ಯತತೆಗಲಿಗಾಗಿ ಉಪಯೋಗಿಸುವುದೇ ಜಲಸಂರಕ್ಷಣೆ .


}ದೇಶದ ಪ್ರತಿ ನಾಗರೀಕನು ಒಂದೊಂದು ಹನಿ ನೀರನ್ನು ಸುವರ್ಣ ಬಿಂದುಗಳೆಂದು ಪರಿಗಣಿಸಬೇಕು .


}ಮಳೆ ನೀರಿನ ಶೇಖರಣೆ ಮಾಡಿ ಶುದ್ಧೀ ಮಾಡುವ ಪ್ರಕ್ರಿಯೆ ವಿಧಾನಗಳು ಪ್ರತೀ ಮನೆಯನ್ನೂ ತಲುಪ ಬೇಕಾಗಿದೆ .ಇದರಿಂದ ಮಳೆ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುವುದನ್ನು ತಪ್ಪಿಸಬಹುದು .


}ಅಮೇರಿಕಾ ,ಥೈಲ್ಯಾಂಡ್ ,ಇಂಗ್ಲಂಡ್ ಇನ್ನಿತರ ರಾಷ್ಟ್ರಗಳಲ್ಲಿ ಸರ್ಕಾರದ ಅನುಮತಿಯಿಲ್ಲದೆ ಅಂತರ್ಜಲವನ್ನು ಬಳಸುವಂತಿಲ್ಲ .ಆದರೆ ಭಾರತದಲ್ಲಿ ಕೊಳವೆ ಬಾವಿಗಳನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ .ಇದರಿಂದ ಯು ಏನ್ ಡಿ ಪಿ ವರದಿಯ ಪ್ರಕಾರ ಪ್ರತಿವರ್ಷ %ಅಂತರ್ಜಲ ಕುಸಿಯುತ್ತಿದೆ .ಆದ್ದರಿಂದ ಸರ್ಕಾರ ಕೂಡಲೇ ಅಂತರ್ಜಲವನ್ನು ಸಂರಕ್ಷಿಸುವ ಪ್ರಭಾವಿ ಕಾಯ್ದೆಯನ್ನು ಜಾರಿಗೆ ತರಬೇಕು .ಅದನ್ನು ಬಿಟ್ಟು ಭೂ ತಾಯಿಯ ಗರ್ಭವನ್ನು ತೋಡಿ ತೋಡಿ ಕೊನೆಗೆ ಬತ್ತಿಸಿ ನೀರು ಬೇಕು ಮಳೆ ಬರಲಿಲ್ಲವೆಂದು ಕತ್ತೆ ಕಪ್ಪೆಗಳಿಗೆ ಮಾಡುವೆ ಮಾಡಿಸಿದರೆ ಸಮಸ್ಯೆ ನೀಗುತ್ತದೆಯೇ ?


}ಕೃಷಿ ಕ್ಷೇತ್ರದಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಹನಿ ನೀರಾವರಿ ಹಾಗು ತುಂತುರು ನೀರಾವರಿ ಪದ್ಧತಿಗಳನ್ನು ಇನ್ನೂ ಯಶಸ್ವಿಯಾಗಿ ಅಳವಡಿಸಬೇಕು .


}ಅರಣ್ಯ ನಾಶವನ್ನೂ ಕೂಡ ತಡೆಯಬೇಕು


}ಮನೆಯ ಆರ್ಥಿಕ ವ್ಯವಹಾರಗಳಿಗೆ ಹೇಗೆ ಹಣವನ್ನು ಮೀಸಲಿಡಲು ಬಜೆಟ್ಟನ್ನು ಮಾಡಿಕೊಳ್ಳುತ್ತೆವೆಯೋ ಹಾಗೆಯೇ ನೀರನ್ನು ಎಷ್ಟು ಬಳಸಿಕೊಳ್ಳ ಬೇಕು ?ಹೇಗೆ ಬಳಸಬೇಕು ?ಎಂಬ ವಾಟರ್ ಬಜೆಟ್ ಕಲ್ಪನೆಯೂ ಬೇಕು


}ಕೆಲವು ಕೃತಕ ಪಾನೀಯ ಕಂಪನಿಗಳು ಎಲ್ಲೆಂದರಲ್ಲಿ ನೆಲ ಅಗೆದು ನೀರನ್ನು ಉಪಯೋಗಿಸಿಕೊಳ್ಳುತ್ತಿವೆ ಅದರ ಬಗ್ಗೆಯೂ ಸರ್ಕಾರ ಗಮನಿಸ ಬೇಕು .




ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು ಇಂತಹ ಜೀವ ಜಲವನ್ನು ಸಮರ್ಪಕವಾಗಿ ಬಳಸಿ,ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ .ಒಂದೆಡೆ ಜನ ನೀರಿಲ್ಲದೇ ಬವಣೆ ಪಡುತ್ತಿದ್ದಾರೆ ಮತ್ತೊಂದೆಡೆ ಪ್ರವಾಹಗಳಿಂದ ನಷ್ಟ ಅನುಭವಿಸುತ್ತಿದ್ದಾರೆ .ಒಮ್ಮೆ ನೀರು ಮಲಿನವಾಗಿ ಜನ ಸತ್ತರೆ ಮತ್ತೊಂದೆಡೆ ಇದೆ ನೀರಿಗಾಗಿ ರಾಜ್ಯ ರಾಜ್ಯಗಳು ಹೊದೆದಾಡುತ್ತಿವೆ. ಎಲ್ಲಸಮಸ್ಯೆಗಳು ಇಂದು ನಿನ್ನೆಯದಲ್ಲ .ಇವಕ್ಕೆ ಸರ್ಕಾರ ಕೇವಲ ತಾತ್ಕಾಲಿಕ ಪರಿಹಾರ ವನ್ನಷ್ಟೇ ನೀಡಿವೆ . ಇದರಿಂದ ಸಮಸ್ಯೆ ಇನ್ನೂ ದ್ವಿಗುಣ ವಾಗಿದೆ .ಇನ್ನಾದರು ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ ?

No comments:

Post a Comment