Friday, March 27, 2009

ಓ ಚೇತನವೇ


ತೊರೆದು ಹೋಗದಿರು ಚೇತನವೇ

ಬಾನಂಗಳದ ವರ್ಷಧಾರೆಯಾಟದಮಿಂಚು ಬೆಳಕಿನ ದೀಪದಂತೆ

ಒಮ್ಮೆಲೇ ಕಂಡು ಮಗದೊಮ್ಮೆ ಮರೆಯಾದಂತೆ


ನೆಲೆಯೂರಿ ಬಿಡು ಆಲದ ಮರದ ವಿಶಾಲ ಬೇರುಗಳಂತೆ

ಪಸರಿಸಿ ಎನ್ನ ಧಮನಿ ಧಮನಿಗಳಲ್ಲಿ ಒಂದಾಗಿ ಜೀವಧಾತುವಾಗಿ

ಅಮೃತ ಬಳ್ಳಿಯಂತೆ ಸಮೀಕರಣವಾಗಿ


ನಿನ್ನ ಕೊಂಬೆಗಳು ಒಣಗಿ ಉರುಟದಿರಲಿ

ಎಲೆಗಳು ಹಣ್ಣಾಗಿ ಬೀಳದಿರಲಿ ನಿತ್ಯ ಪುಷ್ಪ ,ಫಲಗಳ

ಜನ್ಮಿಸಿ ತಂಗಾಳಿಯ ಸುಖ ಸ್ಪರ್ಶಕೆ ತಲೆದೂಗುತ ಹಾಡಿನರಮನೆಯ ಕಟ್ಟುತಲಿ


ಹ್ಹಾ !ಈಗ ನೀ ಎನ್ನ ತೊರೆಯಲಾರೆ ನರ ನರಗಳಲಿ ನಿನ್ನ

ಬೇರು ಬುಡವನ್ನೇ ಕೀಳುವವರಾರು ಇಲ್ಲ ಓ ನನ್ನ ಚೇತನವೇ

ನೀ ಇನ್ನು ಮುಂದೆ ನನ್ನ ಸುಪರ್ದಿಯಲ್ಲಿ .

No comments:

Post a Comment