Wednesday, March 25, 2009

ಬಲಿದಾನ


ಅಗೋ ನೋಡಿ ಕದನ ಕಣದಿ ವೈರಿ ಪಡೆಯ
ಕುತಂತ್ರ ಸಿಡಿವ ಬಾಂಬುಗಳ ಮಧ್ಯದಿ
ಬಲಿದಾನಗೈದ ಅಮರ ಯೋಧರ
ರಕ್ತ ಸಿಕ್ತ ಕಾಯಗಳು ಸಾಗುತಿವೆ

ಭೀಕರ ಯುದ್ಧದಿ ಗುಂಡೇಟು ಗಳಿಗೆ ನಲುಗಿ
ಜೀವನ್ಮರಣ ದಲಿ ಸಿಲುಕಿ ಯಮನೊಂದಿಗೆ
ಹೋರಾಟ ಮಾಡುತಲಿ ,ಯೋಧರ
ಆತ್ಮಗಳು ಅವ್ಯಕ್ತ ಯಾತನೆಯ ಅನುಭವಿಸುತಲಿವೆ .

ಕೊರೆವ ಚಳಿಯಲಿ ಬೆಂಡಾಗಿ ,ಸುಡು ಬಿಸಿಲಿನಲ್ಲಿ
ಕೆಂಪಾಗಿ ,ಪ್ರಾನತರ್ಪನಗೈಯ್ದ ನಿಷ್ಪಾಪಿ ವೀರ
ಯೋಧರ ಆತ್ಮಗಳು ವೀರ
ಸ್ವರ್ಗದ ಹಾದಿ ಹಿಡಿಯುತಿವೆ .

ಮಾತೃ ಭೂಮಿಯ ಉಳಿಸಲು
ಸಮರದಿವೀರಕಂಕನವ ತೊಟ್ಟು ಬುಗಿಲೆದ್ದ ಬೆಂಕಿ ,
ಧೂಮ ಆಸ್ಪೋಟಗಳಲಿ ಅಗಲಿದ ವೀರನ
ನೆನೆದು ನಮ್ಮ ಕಂಗಳು ಅಶ್ರುಧಾರೆಯ ಸುರಿಸುತಲಿವೆ .

No comments:

Post a Comment