
ಸಾಮಾನ್ಯದವನಲ್ಲ ಈ ಕವಿ
ಉದಾತ್ತ ,ಉನ್ಮತ್ತ ರಸಿಕ ಭಾವ ರಂಜನಿಯ
ಘೋಷ್ಟಿಯ ಗರ್ಭದೊಳು ರಾಗಾನುರಾಗವ
ಪಲ್ಲವಿಸಿ ಪ್ರಸವಿಸುವ ಚೇತನ
ದೇವಿ ವಾಣಿಯ ಬಳಿ ಸಾಹಿತ್ಯ ಪಾಠವ ಕಲಿತು
ಭಾಷ್ಯ ಪ್ರೀತಿಸಿ,ಭಾವವ ಆಲಂಗಿಸಿ
ಮಾಧುರ್ಯವ ಪ್ರವೇಶಿಸಿ ,ಪದಗಳೊಂದಿಗೆ
ಸರಸ ಸಲ್ಲಾಪ ಮಾಡುವ ಈ ಕವಿ ಸಾಮಾನ್ಯದವನಲ್ಲ
ಅರ್ಹತಾ ಸೌರಭವ ಆಘ್ರಾಣಿಸಿ ,ಸ್ವಾರಸ್ಯಬಲವ
ಅಧಿಕರಿಸಿ ,ವರ್ಣನಾ ಸಾಮರ್ಥ್ಯವ ಅಭಿವ್ಯಕ್ತಿಸಿ ,ಸುಧಾಂಶುವಿನ
ಸ್ಪೂರ್ತಿಯಲಿ ಪ್ರಪ್ಹುಲ್ಲಿಸಿ ,ಜ್ಞಾನಾಭಿಸಾರಿಕೆಯಪ್ರಾಣನಾಥನಾಗುವ
ಈ ಕವಿ ಸಾಮಾನ್ಯದವನಲ್ಲ
ಚಲುವಾದ ಕವನವ ಹುಟ್ಟಿಸಿ ,ಸಂಸ್ಕಾರದ ಪೀಯುಷವ
ರುಚಿಸಿ ,ಅಸಾಮಾನ್ಯ ವಿದ್ವದ್ಜನರ ಮುಂದಿಟ್ಟು
ಯೋಗ್ಯತಾ ಪರೀಕ್ಷೆಯ ಪೈಪೋಟಿ ಗಿಳಿದು
ಮುಕ್ತ ಕಂಠದ ಸ್ತುತಿಗೊಳಪಡುವ ಈ ಕವಿ ಸಾಮಾನ್ಯದವನಲ್ಲ .
No comments:
Post a Comment