Saturday, March 28, 2009

ಕವಿ ಚೇತನ


ಸಾಮಾನ್ಯದವನಲ್ಲ ಈ ಕವಿ

ಉದಾತ್ತ ,ಉನ್ಮತ್ತ ರಸಿಕ ಭಾವ ರಂಜನಿಯ

ಘೋಷ್ಟಿಯ ಗರ್ಭದೊಳು ರಾಗಾನುರಾಗವ

ಪಲ್ಲವಿಸಿ ಪ್ರಸವಿಸುವ ಚೇತನ


ದೇವಿ ವಾಣಿಯ ಬಳಿ ಸಾಹಿತ್ಯ ಪಾಠವ ಕಲಿತು

ಭಾಷ್ಯ ಪ್ರೀತಿಸಿ,ಭಾವವ ಆಲಂಗಿಸಿ

ಮಾಧುರ್ಯವ ಪ್ರವೇಶಿಸಿ ,ಪದಗಳೊಂದಿಗೆ

ಸರಸ ಸಲ್ಲಾಪ ಮಾಡುವ ಈ ಕವಿ ಸಾಮಾನ್ಯದವನಲ್ಲ


ಅರ್ಹತಾ ಸೌರಭವ ಆಘ್ರಾಣಿಸಿ ,ಸ್ವಾರಸ್ಯಬಲವ

ಅಧಿಕರಿಸಿ ,ವರ್ಣನಾ ಸಾಮರ್ಥ್ಯವ ಅಭಿವ್ಯಕ್ತಿಸಿ ,ಸುಧಾಂಶುವಿನ

ಸ್ಪೂರ್ತಿಯಲಿ ಪ್ರಪ್ಹುಲ್ಲಿಸಿ ,ಜ್ಞಾನಾಭಿಸಾರಿಕೆಯಪ್ರಾಣನಾಥನಾಗುವ

ಈ ಕವಿ ಸಾಮಾನ್ಯದವನಲ್ಲ


ಚಲುವಾದ ಕವನವ ಹುಟ್ಟಿಸಿ ,ಸಂಸ್ಕಾರದ ಪೀಯುಷವ

ರುಚಿಸಿ ,ಅಸಾಮಾನ್ಯ ವಿದ್ವದ್ಜನರ ಮುಂದಿಟ್ಟು

ಯೋಗ್ಯತಾ ಪರೀಕ್ಷೆಯ ಪೈಪೋಟಿ ಗಿಳಿದು

ಮುಕ್ತ ಕಂಠದ ಸ್ತುತಿಗೊಳಪಡುವ ಈ ಕವಿ ಸಾಮಾನ್ಯದವನಲ್ಲ .

No comments:

Post a Comment