
ಸಂತಸವೇಕೆ ನನಗೆಲ್ಲ ಇದೆಯಂದು ?
ಹೆಣೆದುಕೊಂಡ ಭ್ರಮೆ ,ಕಲ್ಪನೆ ,
ಬೆಸೆದ್ಕೊಂದ ಭಾಂದವ್ಯ ,ಬೆಳೆದು ಬಂದ ಸಂಭಂದ
ತೊರೆಯಲೆಬೇಕಲ್ಲ ಕಾಲನ ಕರೆ ಬಂದಾಗ !
ಸ್ವಾರ್ಥವೆಕೆ ನನಗೆಲ್ಲ ಬೇಕೆಂದು ?
ಹೊತ್ತಿದ ಕರ್ಪೂರ ಕರಗಿ ಮಾಯವಾದಂತೆ
ನೀ ಶ್ರೆಷ್ಟನೋ ಕನಿಷ್ಟನೋ ವಿಧಿಯಾಟ
ಕೊನೆಯಾದಾಗ ನೀ ಸೋಲಲೇ ಬೇಕಲ್ಲ !
ಅಯ್ಯೋ !ಚಿಂತೆಯೇಕೆ ನಾನು ಶಾಶ್ವತನಲ್ಲನೆಂದು ?
ನೀನೇನು ಚುಕ್ಕಿ , ಚಂದಮ ,ನೇಸರನಲ್ಲವಲ್ಲ
ಬಿಡುವಿಲ್ಲದೆ ಬಾನಿಗಂತಿ ಕ್ಷಣ ಕ್ಷಣವೂ ಲೆಕ್ಕಾಚಾರದಲಿ
ಬದುಕುವ ಜಾಯಮಾನ ಮಾಡಿಕೊಳ್ಳಲು !
ಚಿಂತೆಯೇಕೆ ನನಗಾರು ಇಲ್ಲವೆಂದು ?
ಹೆತ್ತವ್ವನ ಗರ್ಭದಲಿ ಮೊಳೆತು ಮಾಂಸದ
ಮುದ್ದೆಯಾಗಿ ನವಮಾಸ ಕಣ್ ಮುಚ್ಚಿ
ಕಳೆದು ಹೊರಬರುವವರೆಗೂ ನಿನಗಾರಿದ್ದರು ?
No comments:
Post a Comment