Friday, March 27, 2009

ಬದುಕೇ ಇಷ್ಟು !



ಸಂತಸವೇಕೆ ನನಗೆಲ್ಲ ಇದೆಯಂದು ?


ಹೆಣೆದುಕೊಂಡ ಭ್ರಮೆ ,ಕಲ್ಪನೆ ,


ಬೆಸೆದ್ಕೊಂದ ಭಾಂದವ್ಯ ,ಬೆಳೆದು ಬಂದ ಸಂಭಂದ


ತೊರೆಯಲೆಬೇಕಲ್ಲ ಕಾಲನ ಕರೆ ಬಂದಾಗ !



ಸ್ವಾರ್ಥವೆಕೆ ನನಗೆಲ್ಲ ಬೇಕೆಂದು ?


ಹೊತ್ತಿದ ಕರ್ಪೂರ ಕರಗಿ ಮಾಯವಾದಂತೆ


ನೀ ಶ್ರೆಷ್ಟನೋ ಕನಿಷ್ಟನೋ ವಿಧಿಯಾಟ


ಕೊನೆಯಾದಾಗ ನೀ ಸೋಲಲೇ ಬೇಕಲ್ಲ !



ಅಯ್ಯೋ !ಚಿಂತೆಯೇಕೆ ನಾನು ಶಾಶ್ವತನಲ್ಲನೆಂದು ?


ನೀನೇನು ಚುಕ್ಕಿ , ಚಂದಮ ,ನೇಸರನಲ್ಲವಲ್ಲ


ಬಿಡುವಿಲ್ಲದೆ ಬಾನಿಗಂತಿ ಕ್ಷಣ ಕ್ಷಣವೂ ಲೆಕ್ಕಾಚಾರದಲಿ


ಬದುಕುವ ಜಾಯಮಾನ ಮಾಡಿಕೊಳ್ಳಲು !



ಚಿಂತೆಯೇಕೆ ನನಗಾರು ಇಲ್ಲವೆಂದು ?


ಹೆತ್ತವ್ವನ ಗರ್ಭದಲಿ ಮೊಳೆತು ಮಾಂಸದ


ಮುದ್ದೆಯಾಗಿ ನವಮಾಸ ಕಣ್ ಮುಚ್ಚಿ


ಕಳೆದು ಹೊರಬರುವವರೆಗೂ ನಿನಗಾರಿದ್ದರು ?


No comments:

Post a Comment